Slide
Slide
Slide
previous arrow
next arrow

ಹೆಚ್ಚುತ್ತಿರುವ ಅಪಘಾತ: ಬೈಪಾಸ್ ನಿರ್ಮಾಣಕ್ಕೆ ಆಗ್ರಹ

300x250 AD

ಯಲ್ಲಾಪುರ: ಪಟ್ಟಣದ ಮಧ್ಯದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು,ನಿತ್ಯ ಅಫಘಾತಗಳ ಸರಮಾಲೆ ಜನರನ್ನು ಆಘಾತಗೊಳಿಸುತ್ತಿದೆ. ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಹಾಗೂ ಜನರ ಸುರಕ್ಷತೆಯ ಸಲುವಾಗಿ ಬೈಪಾಸ್‌ನ ಅಗತ್ಯತೆ ಇದೆ. ಕಾರಣ ಡಿ. 11ಕ್ಕೆ ಬೆಳಿಗ್ಗೆ 10 ಘಂಟೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ನಡೆಸಿ ತಹಶಿಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಅವರು ಗುರುವಾರ ಈ ಕುರಿತು ಮಾಹಿತಿ ನೀಡಿ,”ಹೆದ್ದಾರಿಯಲ್ಲಿ ಶಾಲಾ ಮಕ್ಕಳು ಅಪಾಯಕಾರಿ, ಅಸುರಕ್ಷ ಸ್ಥಿತಿಯಲ್ಲಿ ದಾಟಿ ಹೋಗಬೇಕಿದೆ. ಇಲ್ಲಿ ಅಪಘಾತಗಳು ಹೆಚ್ಚುತ್ತಿದೆ. ಪಾದಾಚಾರಿಗಳ ಓಡಾಟ ಸಹ ಸಂಕಷ್ಟಕ್ಕೆ ಸಿಲುಕಿದೆ.ಕಾರಣ ಬೈಪಾಸ್ ಅನಿವಾರ್ಯ ಆಗಿದೆ. ಅಂಕೋಲಾ ಬಾಳೆಗುಳಿಯಿಂದ ಮಾಸ್ತಿಕಟ್ಟೆಯವರೆಗೆ ಚತುಷ್ಪತ ಆಗಲಿದೆ. ಅದಕ್ಕೂ ಮುಂಚಿತವಾಗಿ ಪಟ್ಟಣದಲ್ಲಿ ಬೈಪಾಸ್ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿದರು.

ವೈಟಿಎಸ್ ಎಸ್ ಅಧ್ಯಕ್ಷ ರವಿ ಶಾನಭಾಗ ಮಾತನಾಡಿ, ಹೆದ್ದಾರಿ ಪಕ್ಕದ ಅಂಗಡಿ ಮುಗ್ಗಟ್ಟು ಗಳಿಗೆ ಓಡಾಡಲೂ ಸಾರ್ವಜನಿಕರು ಭಯ ಪಡುವ ಸ್ಥಿತಿ ಇದೆ. ಹೆದ್ದಾರಿ ಅಗಲಿಕರಣ ಆದರೆ, ಪಟ್ಟಣದ ಅಂಗಡಿ ಮುಗ್ಗಟ್ಟು ಸಂಪೂರ್ಣ ನಾಶವಾಗಲಿದೆ. ಸಂಚಾರ ಒತ್ತಡ ನೀಗಿಸಿವ ಕೆಲಸ ಆಗಬೇಕು ಎಂದಾದರೆ ಬೈಪಾಸ್ ಆಗಬೇಕು. ತುರ್ತಾಗಿ ಪಟ್ಟಣದ ಹೆದ್ದಾರಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದರು.

300x250 AD

ಪ್ರಮುಖರಾದ ಮಹಮ್ಮದ್ ಗೌಸ್, ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಜಗನ್ನಾಥ ಮರಾಠೆ, ಉಲ್ಲಾಸ ಪ್ರಭು, ಮಾಧವ ನಾಯಕ, ಸುರೇಶ್ ಬೋರಕರ್, ಬೇಬಿ ಅಮಿನಾ ಶೇಖ್, ಅಬ್ದುಲ್ ಖಾದರ್ ಶೇಖ್,ಧಾಸಿಂತ ಫರ್ನಾಂಡೀಸ್ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top